spot_imgspot_img
spot_img

ಬ್ಯಾಂಕ್ ಆಫ್ ಬರೋಡಾದಲ್ಲಿ ಬಹು ಉಪಕ್ರಮಗಳ ‘ಸ್ವಾತಂತ್ರ್ಯ ದಿನಾಚರಣೆ’

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು.

BOB04

BOB03

ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ದೇಬದತ್ತ ಚಂದ್ ಅವರು ಮಾತನಾಡಿ, “ನಾವು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಬ್ಯಾಂಕ್ ಆಫ್ ಬರೋಡಾ, ರಾಷ್ಟ್ರಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿ, ದೇಶದ ಆರ್ಥಿಕ, ಸಾಮಾಜಿಕ ಮತ್ತು ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುವ ಒಂದು ದೃಢವಾದ ಪಾಲುದಾರವಾಗಿದೆ. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಿದ್ದೇವೆ.” ಎಂದರು.

ಸ್ವಾತಂತ್ರ್ಯ ದಿನದಂದು, ಬ್ಯಾಂಕ್ ಮುಂಬೈನಲ್ಲಿರುವ ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಮತ್ತು ದೇಶಾದ್ಯಂತದ ತನ್ನ ಕಚೇರಿಗಳಲ್ಲಿ ಧ್ವಜಾರೋಹಣ ಸಮಾರಂಭವನ್ನು ಆಯೋಜಿಸಿತು. ಬ್ಯಾಂಕ್ ಮತ್ತು ಅದರ ಉದ್ಯೋಗಿಗಳು ಹರ್ ಘರ್ ತಿರಂಗಾ ಅಭಿಯಾನವನ್ನು ಅನುಮೋದಿಸಿದ್ದಾರೆ.

BOB0110 BOB0210 BOB0310 BOB0410 BOB0510 BOB0610 BOB0710 BOB0810 BOB0910 BOB1010 BOB1110 BOB1210 BOB1310

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ,  ಬ್ಯಾಂಕ್ ಭಾರತದ 70 ಪ್ರಮುಖ ಸ್ಥಳಗಳಲ್ಲಿ ಪ್ರದರ್ಶನಗಳನ್ನು ಸ್ಥಾಪಿಸುವ ಮೂಲಕ ಆಗಸ್ಟ್ 14 ದಿನವನ್ನು ‘ವಿಭಜನೆಯ ಕರಾಳ ನೆನಪಿನ ದಿನ’ ಎಂದು ಗುರುತಿಸಿದೆ. ಪ್ರದರ್ಶನವು ಭಾರತದ ವಿಭಜನೆಯ ಕಥೆಯನ್ನು ವಿವರಿಸುತ್ತದೆ, ವಿಭಜನೆಯ ಸಮಯದಲ್ಲಿ ನಾಗರಿಕರು ಅನುಭವಿಸಿದ ನೋವನ್ನು ಗುರುತಿಸುತ್ತದೆ. ಪ್ರದರ್ಶನಗಳನ್ನು ಉದ್ಘಾಟಿಸಲು ಬ್ಯಾಂಕ್ ಪ್ರಮುಖ ಸ್ಥಳೀಯ ಗಣ್ಯರನ್ನು ಆಹ್ವಾನಿಸಿತು.

‘ಮೇರಿ ಮಾತಿ ಮೇರಾ ದೇಶ್’ ಉಪಕ್ರಮದ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾ ನೌಕರರು ಕೈತುಂಬ ಮಣ್ಣಿನೊಂದಿಗೆ ಪಂಚಪ್ರಾಣ ಪ್ರತಿಜ್ಞೆಯನ್ನು ತೆಗೆದುಕೊಂಡರು, ತಮ್ಮ ನಿಷ್ಠೆ, ಸಮರ್ಪಣೆ ಮತ್ತು ರಾಷ್ಟ್ರದ ಗೌರವವನ್ನು ಪ್ರದರ್ಶಿಸಿದರು.

BOB0310 BOB0210BOB1510 BOB1610 BOB1710 BOB1810 BOB1910 BOB2010 BOB2110 BOB2210 BOB2310 BOB2410 BOB2510 BOB2610 BOB2710 BOB2810 BOB2910

ಬ್ಯಾಂಕ್ ಆಫ್ ಬರೋಡಾ, ಮಂಗಳೂರು ವಲಯವು ಮಡಿಕೇರಿಯಿಂದ ಗುಲ್ಬರ್ಗದವರೆಗೆ 22 ಜಿಲ್ಲೆಗಳಲ್ಲಿ ಒಟ್ಟು 383 ಶಾಖೆಗಳನ್ನು ಹೊಂದಿದೆ ಮತ್ತು ಪ್ರಧಾನ ವ್ಯವಸ್ಥಾಪಕಿ ಹಾಗೂ ವಲಯ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಆರ್. ಇವರೊಂದಿಗೆ ಮಂಗಳೂರಿನ ವಿಜಯ ಟವರ್ಸ್‌ನಲ್ಲಿರುವ ಬ್ಯಾಂಕ್‌ನ ವಲಯ ಕಚೇರಿ ಆವರಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮಂಗಳೂರು ವಲಯದ ಡಿಜಿಎಂ ಹಾಗೂ ಉಪ ವಲಯ ಮುಖ್ಯಸ್ಥರಾದ ಶ್ರೀ ರಮೇಶ್ ಕಾನಡೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶ್ರೀ ಅಶ್ವಿನಿ ಕುಮಾರ್, ಡಿಜಿಎಂ-ನೆಟ್‌ವರ್ಕ್ ಮತ್ತು ಶ್ರೀ ಎಂ.ವಿ.ಎಸ್. ಪ್ರಸಾದ್, ಮಂಗಳೂರು ನಗರ ಪ್ರಾದೇಶಿಕ ವ್ಯವಸ್ಥಾಪಕರು, ಮಂಗಳೂರಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

BOB02

BOB01

‘ಮೇರಿ ಮತಿ ಮೇರಾ ದೇಶ್’ ಅಭಿಯಾನದ ಅಂಗವಾಗಿ ಭಾರತ ಸರ್ಕಾರದ ನಿರ್ದೇಶನದಂತೆ ಪಂಚ ಪ್ರಾಣ ಪ್ರತಿಜ್ಞೆಯನ್ನು ನೆರವೇರಿಸಲಾಯಿತು ಮತ್ತು ಸಸಿಗಳನ್ನು ವಿತರಿಸಲಾಯಿತು.

Support Free & Independent Media

Keep journalism alive – support free, independent media. Help us to do our work by making a contribution. Together, stronger. Together as one.

LEAVE A REPLY

Please enter your comment!
Please enter your name here

Kittall Media Network
KITTALL is a unique Konkani literary website. It is the dream project of well-known Konkani writer and critic Henry Mendonca popularly known as H M Pernal. Kittall carries short stories , poems , essays , novel series, columns by reknowned writers, interview with writers and artists , videos, review on new books , music and art . It also publishes Special reports of Konkani events and news related to konkani literature , art and music. KITTALL was inaugurated on 5th February 2011 by celebrated Konkani poet , President , Kavita Trust and Director (operations) of Daijiworld Media Private Limited, Mr. Melvyn Rodrigues.